ಮೈಸೂರು: ವಿಭಿನ್ನ ಕಥಾಹಂದರ ಮತ್ತು ಪಾತ್ರ ವಿನ್ಯಾಸಕ್ಕೆ ಹೆಸರಾಗಿರುವ ಸಂಜು ನಿರ್ಮಾಣದ ‘ಕೌಂತೇಯ’ ಚಿತ್ರ ತನ್ನ ವಿಶಿಷ್ಟ ರೂಪ ತಾಳುತ್ತಿದೆ. ಬಹುತೇಕ ಚಿತ್ರೀಕರಣವು ಮೈಸೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದ್ದು, ಈಗಾಗಲೇ ಶೇ.70ರಷ್ಟು ಶೂಟಿಂಗ್ ಪೂರ್ಣಗೊಂಡಿದೆ.

ಮೊದಲ ಬಾರಿಗೆ ನೆಗಟಿವ್ ಪಾತ್ರಕ್ಕೆ ಪಾದಾರ್ಪಣೆ: ನಟ ಮನೋರಂಜನ್ ರವಿಚಂದ್ರನ್. ಈಗಾಗಲೇ ಸಾಫ್ಟ್ ಲುಕ್ ಮತ್ತು ರೊಮ್ಯಾಂಟಿಕ್ ಪಾತ್ರಗಳಿಗೆ ಸೀಮಿತವಾಗಿದ್ದ ಮನೋರಂಜನ್, ಈ ಚಿತ್ರದಲ್ಲಿ ಸಂಪೂರ್ಣವಾಗಿ ವಿಭಿನ್ನ ಹಾಗೂ ಹೊಸ ಗೆಟಪ್‌ನೊಂದಿಗೆ ರಹಸ್ಯಮಯ ಛಾಯಾಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರದ ಡಿಮೆನ್ಷನ್ ಮತ್ತು ನೆಗೆಟಿವ್ ಶೇಡ್‌ ಬಗ್ಗೆ ತಂಡವು ಸದ್ಯಕ್ಕೆ ರಹಸ್ಯವನ್ನು ಕಾಯ್ದುಕೊಂಡಿದೆ.

ಅಚ್ಯುತ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಕಥೆಯ ಮೂಲ ರಹಸ್ಯಕ್ಕೆ ಗಂಭೀರ ಟೋನ್ ನೀಡಲಿದ್ದಾರೆ. ಇವರ ಜೊತೆ ಅನನ್ಯ ರಾಜಶೇಖರ್, ಪ್ರಿಯಾಂಕಾ ತಿಮ್ಮೇಶ್ (ACP ಪಾತ್ರ), ಹಾಗೂ ಶರಣ್ಯ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಶರಣ್ಯ ಶೆಟ್ಟಿ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಅವರ ಮಗಳಾಗಿ ಪೋಷಕ ಭಾವನಾತ್ಮಕ ಶೇಡ್‌ ಅನ್ನು ನೀಡಲಿದ್ದಾರೆ.

ಚಿತ್ರದ ನಿರ್ದೇಶನ, ಕಥೆ ಹಾಗೂ ಚಿತ್ರಕಥೆಯನ್ನು ಬಿ.ಕೆ. ಚಂದ್ರಹಾಸ ನಿರ್ವಹಿಸಿದ್ದು, ಸಂಭಾಷಣೆಗೆ ಹರಿ ಪೆನ್ನನ್ನು ಹಿಡಿದಿದ್ದಾರೆ. ಚಿತ್ರವನ್ನು ಶ್ರೀ ಮಾಂಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸುರೇಶ್ ಕುಮಾರ್ ನಿರ್ಮಿಸುತ್ತಿದ್ದು, ಛಾಯಾಗ್ರಹಣಕ್ಕೆ ಖ್ಯಾತ ಪಿಎಲ್ ರವಿ ಕೈ ಜೋಡಿಸಿದ್ದಾರೆ.

ಚಿತ್ರದ ನಿರ್ದೇಶಕರ ಮಾತಿನಂತೆ, “ಕೌಂತೇಯ ಯಾರು?” ಎಂಬ ಪ್ರಶ್ನೆಗೆ ಉತ್ತರ ಚಿತ್ರದ ನಂತರ ಹೊರಬಿದ್ದಾಗ ಮಾತ್ರ ಪ್ರೇಕ್ಷಕರಿಗೆ ಪೂರಕ ಅಚ್ಚರಿ ಸಿಗಲಿದೆಯೆಂತೆ.

ತಂಡದ ಹೇಳಿಕೆಯಂತೆ ಮೊದಲ ಝಲಕ್ ಬಹುಶಃ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *